Friday, May 8, 2009

ಕಾಂಗ್ರೆಸ್ ಸೋತರೇ
ಪಕ್ಷವೇ ಹೊಣೆ!

ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲದಿದ್ದರೆ ಅದಕ್ಕೆ ಆ ಪಕ್ಷವೇ ನೇರ ಹೊಣೆ ಹೊರತು, ಮತದಾರರು ಬೆಂಬಲ ನೀಡದಿರುವುದಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತಪ್ಪು ಹೆಜ್ಜೆಗಳನ್ನಿಡುತ್ತಲೇ ಬಂದಿದೆ. ಈ ಬಾರಿ ಕೂಡ ಅಭ್ಯಥರ್ಿ ಆಯ್ಕೆಯಿಂದ ಹಿಡಿದು, ಪ್ರಚಾರದವರೆಗೆ ಪಕ್ಷ ಎಡವಿದ್ದು ಹಲವು ಕಡೆ.
ಅಂತಿಮ ಕ್ಷಣದಲ್ಲಿ ಅಭ್ಯಥರ್ಿಗಳ ಘೋಷಣೆ ಪಕ್ಷಕ್ಕೆ ಅಂಟಿರುವ ದೊಡ್ಡ ರೋಗ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಈ ರೀತಿ ಮಾಡಬಾರದು ಎಂದು ಪಕ್ಷದ ನಾಯಕರು ಭಾಷಣ ಮಾಡುತ್ತಾರೆ. ಮತ್ತೆ ಚುನಾವಣೆ ಘೋಷಣೆಯಾದಾಗ, ಪಕ್ಷದ ಹೈಕಮಾಂಡ್ ದಿಕ್ಕುತಪ್ಪಿಸಿ, ಗೊಂದ
ಲದ ವಾತಾವರಣ ನಿಮರ್ಿಸಿಸುತ್ತಾರೆ. ಅಭ್ಯಥರ್ಿ ಆಯ್ಕೆಯನ್ನು ವಿನಾಃ ಕಾರಣ ಜಟಿಲಗೊಳಿಸಲಾಗುತ್ತದೆ. ಕೊನೆಗೆ ಭಿನ್ನಮತಕ್ಕೆ ಹೆದರುವ ಹೈಕಮಾಂಡ್ ಕೊನೆ ಕ್ಷಣದಲ್ಲಿ ಅಭ್ಯಥರ್ಿಯನ್ನು ಘೋಷಿಸುತ್ತದೆ. ಇದರಿಂದ ಪ್ರಚಾರಕ್ಕೆ ಸಾಕಷ್ಟು ಸಮಯ ಸಿಗದೆ, ಸಿದ್ಧತೆ ಮಾಡಿಕೊಳ್ಳದ ಪಕ್ಷದ ಅಭ್ಯಥರ್ಿ ಹಿನ್ನಡೆ ಅನುಭವಿಸುತ್ತಾರೆ.
ರಾಜಕೀಯ ಪಂಡಿತರ ಪ್ರಕಾರ ಲೋಕಸಭಾ ಕ್ಷೇತ್ರವೊಂದರಲ್ಲಿ ವ್ಯವಸ್ಥಿತಿ ಪ್ರಚಾರ ನಡೆಸಬೇಕೆಂದರೆ ಓರ್ವ ಅಭ್ಯಥರ್ಿಗೆ ಕನಿಷ್ಠ ಮೂರು ತಿಂಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಕಾಂಗ್ರೆಸ್ಗೆ ಇದಿನ್ನೂ ಅರ್ಥವಾದಂತಿಲ್ಲ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಅಥವಾ ಒಂದೆರಡು ದಿನ ಮೊದಲು `ಬಿ' ಫಾರಂ ನೀಡಲಾಗುತ್ತದೆ. ಈ ಬಾರಿ ಮಂಡ್ಯದಲ್ಲಿ ಕಣಕ್ಕಿಳಿಸಿದ ಅಂಬರೀಷ್ಗೆ ಪಕ್ಷದ ನಾಯಕರೇ ಕೊನೆಯ ಕ್ಷಣದಲ್ಲಿ ಮನೆಗೆ ಹೋಗಿ ಬಿ ಫಾರಂ ನೀಡಿದ್ದು ಕಾಂಗ್ರೆಸ್ ಈ ವಿಷಯದಲ್ಲಿ ಹೊಂದಿರುವ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿಯಾಗಿ ಅನಂತ್ ಕುಮಾರ್ ಸ್ಪಧರ್ಿಸುವುದು ಖಚಿತವಾಗಿತ್ತು. ಇವರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ತೀಮರ್ಾನಿಸಿದ್ದು, ಚುನಾವಣೆಯ ಅಧಿಸೂಚನೆ ಹೊರ ಬಿದ್ದ ಮೇಲೆ. ಮೊದಲ ಎಸ್.ಎಂ. ಕೃಷ್ಣರ ಹೆಸರು ತೇಲಿಬಿಡಲಾಯಿತು, ಕೊನೆಗೆ ಕೃಷ್ಣ ಬೈರೇಗೌಡರಿಗೆ ಬಿ ಫಾರಂ ನೀಡಲಾಯಿತು. ಅದೂ ಕೊನೆಯ ಕ್ಷಣದಲ್ಲಿ. ಇದರಿಂದ ಸರಿಯಾಗಿ ಪ್ರಚಾರ ನಡೆಸಲಾಗಿಲ್ಲ ಎಂದು ಕೃಷ್ಣೆ ಬೈರೇಗೌಡ ಬಹಿರಂಗವಾಗಿಯೇ ಹೇಳಿದ್ದಾರೆ. ಒಂದು ವೇಳೆ ಅವರು ಸೋತರೆ ಪಕ್ಷದ ಈ ವಿಳಂಬ ನೀತಿಯಲ್ಲದೆ ಬೇರೇನೂ ಕಾರಣವಿರಲಿಕ್ಕಿಲ್ಲ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸ್ಪಧರ್ಿಸಿರುವ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಇದೇ ತಪ್ಪು ಮಾಡಿದೆ. ಮೊದಲಿಗೆ ಡಿ.ಕೆ.ತಾರಾದೇವಿಗೆ ಟಿಕೇಟ್ ಗ್ಯಾರಂಟಿ ಎಂದು ಹೇಳಲಾಗಿತ್ತು. ಅವರು ಒಂದು ಸುತ್ತು ಪ್ರಚಾರ ನಡೆಸಿದ್ದೂ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಜ್ಜನ ಜಯಪ್ರಕಾಶ್ ಹೆಗ್ಡೆಯನ್ನು ಕಣಕ್ಕಿಳಿಸಲಾಯಿತು. ರಾಜ್ಯದಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡಕ್ಷೇತ್ರ ಎನಿಸಿಕೊಂಡಿರುವ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಮೇಲೆ ಓಡಾಡಿ ಸರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತದೆಯೇ? ಆಥರ್ಿಕವಾಗಿ ಶಕ್ತರಲ್ಲದ ಹೆಗ್ಡೆ ಕೊನೆ ಕ್ಷಣದಲ್ಲಿ ಉಸಿರುಕಟ್ಟಿಕೊಂಡು ಸಾಧ್ಯವಾದ ಮಟ್ಟಿಗೆ ಪ್ರಚಾರ ನಡೆಸಿದ್ದಾರೆ. ಅವರು ಸೋತರೆ ಅವರಾಗಲೀ, ಪಕ್ಷದ ಕಾರ್ಯಕರ್ತರಾಗಲಿ ಹೊಣೆಯಲ್ಲ. ಒಂದಿಷ್ಟು ಸಿದ್ಧತೆ ಮಾಡಿಕೊಳ್ಳದ ಪಕ್ಷದ ನಾಯಕರು.
ಹೆಚ್ಚು ಕಡಿಮೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯಥರ್ಿಯನ್ನು ಕಣಕ್ಕಿಳಿಸುವ ಕುರಿತು ಪಕ್ಷ ಇದೇ ರೀತಿ ಗೊಂದಲ ಸೃಷ್ಟಿಸಿತು. ಅಭ್ಯಥರ್ಿಯಾರೆಂದು ಗೊತ್ತಾಗದೆ ಕ್ಷೇತ್ರದಲ್ಲಿನ ಪಕ್ಷದ ನಾಯಕರು ಗೊಂದಲದಲ್ಲಿ ಬಿದ್ದು, ತಂತ್ರಗಾರಿಕೆ ರೂಪಿಸುವುದನ್ನು ಮರೆತು ದಿಲ್ಲಿಯತ್ತ ಮುಖ ಮಾಡಿ ಕುಳಿತಿದ್ದರು. ಹೀಗೆ ಪಕ್ಷದ ಶಕ್ತಿಯನ್ನು ವ್ಯರ್ಥ ಮಾಡಿದ ಕೀತರ್ಿ ಪಕ್ಷದ ನಾಯಕರಿಗೆ ಮತ್ತು ಹೈಕಮಾಂಡ್ಗೇ ಸಲ್ಲಬೇಕು.


ನಿರ್ಲಕ್ಷ್ಯಕ್ಕೆ ಎಣೆಯೇ ಇಲ್ಲ
ಕಾಂಗ್ರೆಸ್ ತೋರಿಸಿದ ನಿರ್ಲಕ್ಷ್ಯ ಸಾಮಾನ್ಯವಾದದುದಲ್ಲ. ಚುನಾವಣೆ ಘೋಷಣೆಯಾಗಿ, ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿ, ಪ್ರಚಾರ ನಡೆಸುತ್ತಿದ್ದರೂ, ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರೇ ನೇಮಕಗೊಂಡಿರಲಿಲ್ಲ. ಯಾವ ಮುಖಂಡರು ಎಲ್ಲಿ ಪ್ರಚಾರ ನಡೆಸುತ್ತಿದ್ದಾರೆಂಬ ಮಾಹಿತಿ ಕೆಪಿಸಿಸಿ ಬಳಿಯೇ ಇರಲಿಲ್ಲ. ರಾಜ್ಯದಲ್ಲಿ ಯಾವ ಯಾವ ನಾಯಕರನ್ನು ಪ್ರಚಾರಕ್ಕಿಳಿಸಬೇಕು, ಯಾರ್ಯಾರು ಯಾವ ಭಾಗದಲ್ಲಿ ಪ್ರಬಾವಶಾಲಿಗಳಾಗಿದ್ದಾರೆ, ಪ್ರಚಾರದ ರ್ಯಾಲಿಗಳನ್ನು ಎಲ್ಲೆಲ್ಲಿ ನಡೆಸಬೇಕು, ಯಾವ ರಾಷ್ಟ್ರನಾಯಕರನ್ನು ಎಲ್ಲಿಗೆ ಕರೆಸಿಕೊಳ್ಳಬೇಕು ಎಂಬ ಮಾಹಿತಿಯೇ ಇಲ್ಲದೆ ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿತ್ತು!
ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಮತ್ತು ಕಾಯರ್ಾಧ್ಯಕ್ಷ ಡಿ.ಕೆ. ಶಿವಕುಮಾರ್ ತಮಗೆ ಇಷ್ಟ ಬಂದಲ್ಲಿ ಪ್ರಚಾರ ನಡೆಸುತ್ತಿದ್ದರು. ಉಳಿದವರು ಗೊಂದಲದಲ್ಲಿದ್ದರು. ಎಸ್.ಎಂ. ಕೃಷ್ಣರಂತೂ ಮನೆ ಬಿಟ್ಟು ಹೊರಟೇ ಇರಲಿಲ್ಲ. ಕೊನೆ ಕ್ಷಣದಲ್ಲಿ ಜಿ.ಪರಮೇಶ್ವರ್ರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಆಗ ಒಂದಿಷ್ಟು ವ್ಯವಸ್ಥಿತ ಪ್ರಚಾರ ಆರಂಭಗೊಂಡಿತ್ತು. ಇದೇ ಕೆಲಸವನ್ನು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮಾಡಿದ್ದರೆ, ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಸಾಧ್ಯವಾಗಿರುತ್ತಿತ್ತು. ಆದರೆ, ಎಲ್ಲರೂ ಕಾಲೆಳೆಯುವ ರಾಜಕಾರಣದಲ್ಲಿಯೇ ಬಿಜಿಯಾಗಿರುವಾಗ ಈ ಬಗ್ಗೆ ಯೋಚಿಸುವವರಾದರೂ ಯಾರು?
ಇನ್ನು ರಾಜ್ಯ ಸಕರ್ಾರದ ವೈಫಲ್ಯಗಳನ್ನು ಜನತೆಯ ಮುಂದಿಡುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ವಿಫಲವಾಗಿದೆ ಎನ್ನಬಹುದು. ರಸಗೊಬ್ಬರಕ್ಕಾಗಿ ಹೋರಾಟ ನಡೆಸುತ್ತಿರುವವರನ್ನು ಸಕರ್ಾರ ಗುಂಡಿಟ್ಟು ಕೊಂದಿದ್ದಾಗಲೀ, ವಗರ್ಾವಣೆಯ ದಂದೆಯಾಗಲೀ ಪರಿಣಾಮಕಾರಿಯಾಗಿ ಚುನಾವಣೆಯ ವಿಷಯವಾಗಲಿಲ್ಲ. ಗಣಿಗಾರಿಕೆ ಒಂದಿಷ್ಟು ಪ್ರಸ್ತಾಪಗೊಂಡಿದ್ದರೂ, ಬಿಜೆಪಿ ನಾಯಕರ ಬಾಯಿಕಟ್ಟುವ ಕೆಲಸವನ್ನು ಮಾಡಲಿಲ್ಲ. ಬಿಜೆಪಿ ಬಜೆಟ್ ಪ್ರಕಟಣೆಗಳನ್ನು ಸಾಧನೆ ಎಂದು ಬಿಂಬಿಸುತ್ತಿದ್ದರೆ, ಬಜೆಪಟ್ನಲ್ಲಿ ಪ್ರಕಟಿಸಿದ ಯೋಜನೆಗಳ ಜಾರಿ ಯಾವ ಹಂತದಲ್ಲಿವೆ, ಸಕರ್ಾರ ಹೇಗೆ ವಿಫಲವಾಗಿವೆ ಎಂದು ಮತದಾರರ ಗಮನಸೆಳೆಯಲಿಲ್ಲ.
ಇದಕ್ಕೆ ಬದಲಾಗಿ, ಕಾಂಗ್ರೆಸ್ ನಾಯಕರೇ ಮಲ್ಲಿಕಾಜರ್ುನ ಖಗರ್ೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯವನ್ನು ಬಿಜೆಪಿ ಮಂದಿಗೆ ಅಸ್ತ್ರವಾಗಿ ನೀಡಿದರು. ಸಿದ್ಧರಾಮಯ್ಯರಂತೂ ಈ ವಿಷಯದಲ್ಲಿ ಬೇಜವಬ್ದಾರಿಯಿಂದ ವತರ್ಿಸಿ, ಇನ್ನಷ್ಟು ಸಮಸ್ಯೆ ಸೃಷ್ಟಿಸಿದರು. ಕಾಂಗ್ರೆಸ್ ಮಾಡಿದ ಒಂದೇ ಒಂದು ಒಳ್ಳೇ ಕೆಲಸ ಎಂದರೆ ಸಿದ್ಧರಾಮ್ಯರಿಗೊಂದು ಹೆಲಿಕಾಪ್ಟರ್ ನೀಡಿ, ಅವರು ರಾಜ್ಯದಾದ್ಯಂತ ಪ್ರಚಾರ ನಡೆಸುವಂತೆ ಮಾಡಿದ್ದು!
ಕೆಪಿಸಿಸಿ ಪ್ರಚಾರದ ಸಂದರ್ಭದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳನ್ನು ಪಟ್ಟಿ ಮಾಡಿ, ಸಕರ್ಾರದ ವಿಫಲತೆಗಳ ಬಗ್ಗೆ ಟಿಪ್ಪಣಿ ಮಾಡಿ ಪಕ್ಷದ ನಾಯಕರಿಗೆ ಒದಗಿಸಿದ್ದರೆ, ಪರಿಣಾಮಕಾರಿಯಾಗಿ ಪ್ರಚಾರ ಸಾಧ್ಯವಾಗುತ್ತಿತ್ತು. ಯಾವುದೇ ಗೊತ್ತು ಗುರಿ ಇಲ್ಲದವರಂತೆ ಪಕ್ಷದ ನಾಯಕರು ಮಾತನಾಡಿದರು. ಹೀಗಾಗಿ ಬಿಜೆಪಿಯನ್ನು ಕಟ್ಟಿ ಹಾಕುವುದು ಪಕ್ಷಕ್ಕೆ ಕಟ್ಟವಾಯಿತು. ಇನ್ನು ಮಾಧ್ಯಮಗಳನ್ನು ಬಳಸಿಕೊಳ್ಳುವಲ್ಲಿಯೂ ಪಕ್ಷ ಹೆಚ್ಚಿನ ಮುತುವಜರ್ಿ ತೋರಿಸಲಿಲ್ಲ. ಒಟ್ಟಾರೆ ಪ್ರಚಾರವನ್ನು ವ್ಯವಸ್ಥಿತವಾಗಿ ಮಾಡಬೇಕೆಂಬ ಕಲ್ಪನೆಯೇ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲ. ಇದು ಸೋಲಿಗೆ ಕಾರಣವಾಗದಿರುತ್ತದೆಯೇ?


ಕಲಿಗಳ ಆಯ್ಕೆಯಲ್ಲಿ ಸೋತಿತು ಪಕ್ಷ
ಕಾಂಗ್ರೆಸ್ ಪಕ್ಷ ಒಂದಿಷ್ಟು ಬುದ್ಧಿವಂತಿಕೆ ಉಪಯೋಗಿಸಿ, ಕೆಲ ಕ್ಷೇತ್ರಗಳ ಅಭ್ಯಥರ್ಿಗಳನ್ನು ಆಯ್ಕೆ ಮಾಡಿದ್ದರೆ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಹಾಕುವುದು ಕಷ್ಟವೇನೂ ಆಗುತ್ತಿರಲಿಲ್ಲ.
ಉದಾಹರಣೆಗೆ ಬೆಂಗಳೂರಿನ ವಿಷಯಕ್ಕೆ ಬರೋಣ. ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಮಾಜಿ ಸಚಿವ ಜಾಫರ್ ಷರೀಫ್ರನ್ನೇ ಕಣಕ್ಕಿಳಿಸಿದಲ್ಲಿ ಗೆಲುವು ಖಚಿತವಾಗಿರುತ್ತಿತ್ತು. ಹೈಕಮಾಂಡ್ ಒಂದಿಷ್ಟು ಮುತುವಜರ್ಿ ವಹಿಸಿದ್ದರೆ ಸಾಂಗ್ಲಿಯಾನರನ್ನು ಸಮಾಧಾನ ಪಡಿಸುವುದು ಕಷ್ಟವೇನೂ ಆಗುತ್ತಿರಲಿಲ್ಲ. ಆಗ ಬೆಂಗಳೂರು ಉತ್ತರದಲ್ಲಿ ಕೃಷ್ಣ ಬೈರೇಗೌಡರನ್ನೇ ಕಣಕ್ಕಿಳಿಸಬಹುದಿತ್ತು. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಅವರ ಗೆಲುವಿನ ದಾರಿ ಕೂಡ ಸುಗಮವಾಗಿರುತ್ತಿತ್ತು. ಇತ್ತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಸ್.ಎಂ.ಕೃಷ್ಣರ ಮನವೊಲಿಸಿ ಕಣಕ್ಕಿಳಿಸಿದ್ದರೆ, ಸೋಮಣ್ಣ ಕೂಡ ಬಿಜೆಪಿ ಸೇರುತ್ತಿರಲಿಲ್ಲ. ಬೆಂಗಳೂರಿನ ಪ್ರಮುಖ ಮೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯಥರ್ಿಗಳು ಗೆಲ್ಲುವುದು ಖಚಿತವಾಗಿರುತ್ತಿತ್ತು. ಇದರಿಂದ ಬಿಜಿಪಿಯ ಹೃದಯಕ್ಕೇ ಪೆಟ್ಟುಕೊಟ್ಟಂತಾಗಿರುತ್ತಿತ್ತು. ಆದರೆ ಹೀಗೆ ನಿಷ್ಟೂರವಾಗಿ ತೀಮರ್ಾನ ತೆಗೆದುಕೊಳ್ಳಲು ಪಕ್ಷಕ್ಕೆ ಸಾಧ್ಯವಾಗದಿರುವುದೇ ಅದರ ದೌರ್ಬಲ್ಯ.

No comments:

Post a Comment